ಸಾಮಿ ಅಸೋಸಿಯೇಟ್ಸ್ ಲಾಂಛನದಲ್ಲಿ ಟಿ.ಪಿ.ಸಿದ್ದರಾಜು ಅವರು ನಿರ್ಮಿಸುತ್ತಿರುವ ‘ಹೊಂಬಣ್ಣ ಚಿತ್ರದ ಮುಹೂರ್ತ ಸಮಾರಂಭ ಕಳೆದವಾರ ಧರ್ಮಗಿರಿ ಶ್ರೀಮಂಜುನಾಥೇಶ್ವರ ದೇವಸ್ಥಾನದಲ್ಲಿ ನಡೆಯಿತು. ಚಿತ್ರದ ಪ್ರಥಮ ಸನ್ನಿವೇಶಕ್ಕೆ ಸಚಿವರಾದ ಕಿಮ್ಮನೆ ರತ್ನಕಾರ ಆರಂಭ ಫಲಕ ತೋರಿದರು. ನಿರ್ದೇಶಕ ಗಡ್ಡವಿಜಿ ಕ್ಯಾಮೆರಾ ಚಾಲನೆ ಮಾಡಿದರು.
ರಕ್ಷಿತ್ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಸಹ ನಿರ್ಮಾಪಕರು ಕೆ.ಬಿ.ಎಸ್.ಗೌಡ್ರು. ಪ್ರವೀಣ್ ಛಾಯಾಗ್ರಹಣ, ವಿನು ಮನಸು ಸಂಗೀತ ನಿರ್ದೇಶನ ಹಾಗೂ ಅಕ್ಷಯ್ ಅವರ ಸಂಕಲನವಿರುವ ಈ ಚಿತ್ರದಲ್ಲಿ ಐದು ಹಾಡುಗಳಿವೆ. ಬೆಂಗಳೂರು, ಆಗುಂಬೆ, ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಯಲಿದೆ.
ದತ್ತಣ್ಣ, ಸುಚೇಂದ್ರ ಪ್ರಸಾದ್, ಅಂಬುಜಾಕ್ಷಿ, ಮೈಸೂರು ಗೋಪಿ, ಸುಬ್ರಹ್ಮಣ್ಯ, ಧನಂಜಯ, ವರ್ಷ, ಕೃದನ್, ಶಬರೀಶ್, ಶ್ರೀಧರ ಸಾಗರ, ಚಂದ್ರಶೇಖರ್, ರಂಜಿತ, ಪರಮೇಶ್ ದೊಡ್ಡೆನಹಳ್ಳಿ, ಸವಿತ, ಜಗದೀಶ್, ರೆತೀಶ್(ಟಿವಿ ೯), ಅನೀಶ್, ದರ್ಶನ್, ಮಂಜುಪಾಟೀಲ್ ಮುಂತದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಹುಟ್ತಾನೆ ಭೂಮಿಗ್ಯಾರು ಬೇಲಿ ಹಾಕಂಡ್ ಹುಟ್ಟಲ್ಲ ಎಂಬ ಅಡಿಬರಹ ‘ಹೊಂಬಣ್ಣ ಚಿತ್ರಕ್ಕಿದೆ.